Tuesday, August 14, 2007

ಕನ್ನಡ ನಾಡಿನ ಕಬ್ಬಿಗರು -೧ ( ನಯಸೇನ)

ನಯಸೇನ ( ಕ್ರಿ.ನೂ.1112 )

ಈತ ಜಿನ ಕಬ್ಬಿಗ. 'ಧರಮಾಮ್ರುತ' ಈತನ ನೆಗೞ್ಚು. ಬೇಕರನದ ಬಗ್ಗೆ ಕೂಡ ಬರೆದಿದ್ದಾನೆ. ಈತನ ಕಬ್ಬದಲ್ಲಿ ' ಮುಳುಗುಂದದೊಳಿರ್ದು.." ಇರುವುದರಿಂದ ಇವನು ಮುಳುಗುಂದದಲ್ಲಿ ಇದ್ದನೆಂದು ತಿಳಿಯಬಹುದು. ಕೆಳಗೆ ಕೊಟ್ಟಿರುವ ಸಾಲುಗಳಿಂದ ತಿಳಿಯುವುದೇನೆಂದರೆ ಈತನ ಹೊತ್ತಿನಲ್ಲಿಯೇ ಕಬ್ಬಿಗರು ಬೇಡದೇ ಇರುವ ಸಕ್ಕದದ ಒರೆಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ.


೧) ಪೊಸಗನ್ನಡದಿಂ ವ್ಯಾವ
ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ
ತಿಸಿ ಕೂಡಲಾಱದಕ್ಕಟ
ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ
ತಿಳಿವು: ಕನ್ನಡ ಕಬ್ಬಗಳನ್ನು ಬರೆಯಲು ತೊಡಗಿದರೆ ಅದರಲ್ಲೇ ಬರೆಯಬೇಕು. ಸಕ್ಕದ ಒರೆಗಳನ್ನು ತುಮ್ಬುವುದು ತಪ್ಪು, ಹಾಗೆ ಬರೆದವನನ್ನು ಕಬ್ಬಿಗ ಎನ್ನಬಹುದೇ?


೨) ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಸುದ್ದಗನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮಂ


ತಿಳಿವು: ಸಕ್ಕದದಲ್ಲಿ ಹೇಳಬೇಕಾದುದನ್ನ ಸಕ್ಕದದಲ್ಲಿ ಹೇಳಿ/ಬರೆಯಿರಿ/ನೆಗೞ್ಚಿ, ಅದರ ಬದಲು ಸಕ್ಕದವನ್ನು ಕನ್ನಡದ ಕಬ್ಬದಲ್ಲಿ ತಂದಿಕ್ಕಿದರೆ ಎಣ್ಣೆಗೆ ತುಪ್ಪ ಬೆರೆಸಿದಂತಾಗುತ್ತದೆ. ಎಂದೂ ಹೊಂದಲ್ಲ.

ಎಡರೊರೆಗಳ ತಿಳಿವು

ಘೃತ - ತುಪ್ಪ
ತೈಲ - ಎಣ್ಣೆ

2 comments:

Shree said...

ಘೃತ ಮತ್ತು ತೈಲ ಸಂಸ್ಕೃತ ಪದಗಳು - ತುಪ್ಪ ಮತ್ತು ಎಣ್ಣೆ ಅಚ್ಚ ಕನ್ನಡ ಪದಗಳು !!!

Unknown said...

Vampires in the Enchanted Castle casino - FilmFileEurope
Vampires in the 토토 사이트 Enchanted Castle Casino. Vampires in the 바카라사이트 Enchanted Castle Casino. Vampires in the Enchanted 출장마사지 Castle Casino. Vampires https://febcasino.com/review/merit-casino/ in 출장마사지 the Enchanted Castle Casino. Vampires in the Enchanted